* ಕಬ್ಬನ್ ಪಾರ್ಕ್ ಇನ್ನೂ ಮತ್ತಷ್ಟು ಹೈಲೈಟ್ * ವೈವಿಧ್ಯಮಯ ಸಸ್ಯರಾಶಿಯನ್ನು ತನ್ನ ಮಡಿಲಲ್ಲಿ ತುಂಬಿಕೊಂಡು ಸದಾಕಾಲವೂ ಹಚ್ಚ ಹಸಿರಾಗಿ ಪರಿಸರ ಪ್ರೇಮಿಗಳ ಮನಸ್ಸಿಗೆ ಸಂತೋಷ ಉಣಬಡಿಸುವ ಸುಂದರವಾದ ತಾಣವೇ ಲಾರ್ಡ್ ಕಬ್ಬನ್ ರವರ ಪ್ರೀತಿಯ ಕಬ್ಬನ್ ಪಾರ್ಕ್. ಸಿಲಿಕಾನ್ ಸಿಟಿ ಬೆಂಗಳೂರಿನ ಕಬ್ಬನ್ ಪಾರ್ಕ್ ಯಾರಿಗೆ ತಾನೇ ಗೊತ್ತಿಲ್ಲ, ಪರಿಸರ ಸ್ನೇಹಿಗಳನ್ನು ತಟ್ಟಂದು ಸೆಳೆಯುವ ಸುಂದರ ಉದ್ಯಾನವನಕ್ಕೆ ಇದೀಗ ವಿಭಿನ್ನ ತಳಿಯ ಬಿದಿರು ನಾಟಿ ಹೊಸ ಜೀವ ತುಂಬಲಿದೆ. ತೋಟಗಾರಿಕೆ ಇಲಾಖೆ ಹೀಗೊಂದು ನೂತನ ಪ್ರಯೋಗಕ್ಕೆ ಸಜ್ಜಾಗಿದೆ. ದೇಶ ವಿದೇಶಗಳಿಂದ ತಂದ ಬಣ್ಣ ಬಣ್ಣದ ಬಿದರಿನ ತಳಿಗಳು ಇನ್ನು ಪರಿಸರ ಪ್ರೇಮಿಗಳ ಮನಸೆಳೆಯಲಿದೆ. ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. * ಬಿದಿರಿನ ಕಲಾಕೃತಿ ಅನಾವರಣ * ಕಬ್ಬನ್ ಪಾರ್ಕ್ ನಲ್ಲಿ ಮೊದಲು ಬಿದ್ದದ ಬಿದಿರಿನ ಮರಗಳಿಗೆ ಕಲಾವಿದರು ಕಲಾಕೃತಿಯ ಸ್ಪರ್ಶ ಒದಗಿಸುವ ಮೂಲಕ ಪಾರ್ಕ್ ನ ಸೌಂದರ್ಯವನ್ನು ಹೆಚ್ಚಿಸಲಾಗುತ್ತದೆ, ಈ ಕಲಾಕೃತಿಯ ಅನಾವರಣ ಆಗದಿದ್ದ ಸಮಯದಲ್ಲಿ ಬಿದಿರುಗಳನ್ನು ಭದ್ರಾವತಿ ಕಾಗದ ಕಾರ್ಖಾನೆಗೆ ನೀಡುವ ಚಿಂತನೆ ನಡೆಸಿದೆ. ಇವೆರಡೂ ಯೋಜನೆಗಳು ಫಲಿಸದಿದ್ದರೆ ಹರಾಜು ಹಾಕುವ ಇಂಗಿತವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. * ಕೇರಳಕ್ಕೆ ತಜ್ಞರ ಭೇಟಿ * ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ನೇತೃತ್ವದ ತಂಡ ಒ...
Comments
Post a Comment